ಹಾಗೇ ಒಂದಷ್ಟು ಹನಿಗಳು....
* ಸೂರ್ಯ ಮನೆಗೋಡಿದ;
ಹೂ ಮುದುಡಿತು.....
* ಬೆಳಕ ನೋಡಿ ಕತ್ತಲೆ ಓಡಿತು...
ಬೆಳಕೆಂದು ಓಡುವುದು?
* ಮನಸೆಂಬ ಕುದುರೆಗೆ
ಓಡುವುದೆ ಇಷ್ಟ....
* ಒಬ್ಬ ಪ್ರಸಿದ್ಧ ಕವಿಯ ಮನೆಗೆ ಹೋದಾಗ
ಕಂಡದ್ದು ಜೇಡರ ಬಲೆ, ಧೂಳು...
ನಾವೆಲ್ಲಿದ್ದೇವೆ?
ಅಸಹಾಯಕ ಬದುಕಿನ ಕೊನೆಯಲ್ಲಿ,
ಸಂಸಾರ, ತಾಪತ್ರಯಗಳ ಸುಳಿಯಲ್ಲಿ,
ಮನ ನೊಂದು, ಮನೆ ಬೆಂದು
ಸೂರ್ಯ-ಚಂದ್ರಾದಿ ತಾರೆಗಳ
ಜೊತೆ ಬೆರೆತು,
ಮರಳಿ ಅವಲೋಕಿಸಿದಾಗ,
ನಾವೆಲ್ಲಿದ್ದೇವೆ?
ಪರಿಸರ-ಪಕ್ಷಿ ತೆರೆ ಬಿಟ್ಟು ಮರೆಗೆ ಜಾರಿದಂತೆ,
ಜ್ನ್ಯಾನ ಹೊಳೆ ಮೈ ತುಂಬಿ ಹರಿದಂತೆ,
ಪ್ರೀತಿ ಸುಧೆ ಮೃಗವಾಗಿ ಅಲೆದಂತೆ,
ಸಂಸ್ಕೃತಿ ಸಂಜೀವಿನಿಯಾದಂತೆ,
ಮರೀಚಿಕೆಯ ದಾರಿಯಲ್ಲಿ ನಿಂತಾಗ
ನಾವೆಲ್ಲಿದ್ದೇವೆ?
ಯೋಗಗಳು, ಭೋಗಗಳು ಜೀವನದ ಪಯಣದಲಿ,
ಜ್ನ್ಯಾನ ದೀಪ ಬೆಳಕನ್ನು ಬೀರುತ್ತಿದ್ದಾಗ,
ಬದುಕ ಅರ್ಥೆಸಿಕೊಂಡ ಅಹಂ ನಿಂತಾಗ
ಸಮಾಜದ, ಜನರ ಮಧ್ಯದಲ್ಲಿ
ಕಿವಿ ತೆರೆದು, ಕಣ್ಬಿಟ್ಟು
ನೋಡಿದಾಗ
ನಾವೆಲ್ಲಿದೇವೆ?
ಯುದ್ಧ ಕಣದಲ್ಲಿ, ವ್ಯಾಪಾರ ಮಾಡುವಾಗ,
ಬಿದ್ದ ಕಣ್ಣೀರಿನ ಜಾಗದಲ್ಲಿ,
ಜೀವ ಜೀವಕೆ ಮರಣ ಬಂದಾಗ
ಬಾಳಿನ ವಿಕೃತಿಗೆ ಬೆರಗಾಗಿ,
ಮರಳಿ ಅವಲೋಕಿಸಿದಾಗ ,
ನಾವೆಲ್ಲಿದ್ದೇವೆ?
ಸಾವಿರ ಕನಸುಗಳ , ಕಣ್ಣೀರುಗಳ,
ಆಶಯ, ಹರಕೆ , ಸಂತೋಷಗಳ
ಮುಖ ನೋಡಿ, ಆಸೆ ಪಟ್ಟು
ಪಡೆಯ ಬಯಸಿ,
ತಿರುಗಿ ನಡೆದಾಗ, ಆಶ್ಚರ್ಯ !!!!
ನಾವೆಲ್ಲಿದ್ದೇವೆ???
ಸೆರೆಯಲ್ಲಿ ಜನಿಸಿ, ಗೋಕುಲ ಪ್ರವೇಶಿಸಿ ,
ದಟ್ಟ ನಡುರಾತ್ರಿ ಯಮುನೆ ಬಗೆದು,
ಯಶೋದೆಯ ಮಡಿಲು ತುಂಬಿ,
ಮನಸು ಹಿಂಡಿ ಕಹಿಯಾಗಿಸಿ ನಿನಗಾಗಿ
ಕಾದ ದೇವಕಿಯ ದುಃಖ ನೋಡದೆ ,
ಪೂತನಿಯ ಕೊಂದ ನಿನ್ನ ಬಾಲಲೀಲೆಗಳ
ಎಂತು ಬಣ್ಣಿಸಲಿ
ಬಕ, ಶುಕ, ಕಾಳಿಂಗನ ಲೆಕ್ಕಿಸದೆ
ಗೋವರ್ಧನ ಗಿರಿಯಡಿ ಆಶ್ರಯವಿತ್ತ ಆಶ್ರಯದಾತ ,
ಗೋಪಿಕೆಯರ ಕನಸಲ್ಲಿ, ಕುಳಿತಲ್ಲಿ ,ನಿಂತಲ್ಲಿ
ಮನಸಲ್ಲಿ ಸರ್ವವ್ಯಾಪಿಯಾದ ಕಳ್ಳ ಕೃಷ್ಣ ನೀನು.....
ರಕ್ಕಸರ ಸೊಕ್ಕಿನಡಿ ಭೂ ಮಾತೆ ಸಿಲುಕಿರಲು
ಆ ಕ್ರೂರ ಕಂಸನ ಕೊಂದ
ಪುರುಷೋತ್ತಮ ನೀನು,
ಪಾಂಡವರ ಪರವಾಗಿ ಅತ್ತೆಯ ಮಕ್ಕಳನ್ನು ನಿರ್ನಾಮಗೊಳಿಸಿದ
ಶ್ರೀ ಕೃಷ್ಣ ಪರಮಾತ್ಮ ನೀನು
ಅಗ್ನಿ ಪುತ್ರಿಯಾದ ಪಾಂಚಾಲಿಯ ಮಾನ ಉಳಿಸಿ
ಪುರಾಣಗಳಲ್ಲಿ ಗೌರವ ಕಾಯ್ದಿರಿಸಿದ ಮಹಾಮುಕುಟ ನೀನು
ಪದಿನಾರು ಸಹಸ್ರ ಸ್ತ್ರೀಯರ ಕುಂಕುಮ ನೀನು
ಸ್ಥ್ರೀಲೋಲನೆನಿಸಿದ್ದರಲ್ಲಿ ಸಂದೇಹವೇನು?
ಮಾನವನ ಮಾಯೆ ಅತಿಯಾದಾಗ,
ಭಗವದ್ಗೀತಾ ಹಾಡಿ,
ಪಾರ್ಥನ ಯೋಧನಾಗಿಸಿದ್ದರಲ್ಲಿ,
ಸುಯೋಧನನ ದರ್ಪ ಶಮನಗೊಳಿಸಿದ್ದರಲ್ಲಿ,
ಬ್ರಹ್ಮಚಾರಿಯಾದ ನಿನ್ನ ಆಂತರ್ಯದ ಪರಿಭಾಷೆ
ನ್ಯಾಯ, ಧರ್ಮವಲ್ಲದೆ ಮತ್ತಿನ್ನೇನು ??
ಕಪಟಿ, ಮೋಸಗಾರ, ವಂಚನೆ ಹಾಗೂ ಸುಳ್ಳು
ನಾಟಕಗಳ ಸೂತ್ರಧಾರ ನೀನೆಂದು ಬಣ್ಣಿಸಿದ
ಜನರಲ್ಲಿ ಭಕ್ತಿಯ ಪ್ರೀತಿಯನ್ನು ಬಿತ್ತಿದ ...
ಹೇ .......
ಕೇಶವ , ಮಾಧವ, ವೇಣುಗೋಪಾಲ , ಮಧುಸೂಧನ
ಸ್ತ್ರೀಲೋಲ, ಜನಾರ್ಧನ, ದಶ ಜನ್ಮಗಳ ನೇತಾರ
ಕೃಷ್ನೋತ್ತಮ ನಿನ್ನನೆಂತು ನಾ ಬಣ್ಣಿಸಲಿ...........
ದಿನವೂ ನಡೆಯುವ ದಾರಿಯಲ್ಲಿ,
ಒಂಟಿ ಮನೆಯ ಮುಂದೆ ಸುಂದರ
ರಂಗೋಲಿಯ ಕಂಡು ನಿಂತೆ;
ಅದರ ಎಳೆ ಎಳೆಯಲ್ಲೂ ಪ್ರೀತಿ ತುಂಬಿತ್ತು ,
ವಾತ್ಸಲ್ಯದ ರಂಗು ಮುಸುಕಿತ್ತು,
ಸುತ್ತಮುತ್ತಲೂ ನೋಡಿದೆ;
ಕಿಟಕಿ ಮುಚ್ಚಿತ್ತು !!!
ಮನೆಯೊಡತಿ ಕಾಣುವಳೇ................
ಹೀಗೆ...
ದಿನವೂ ಇದೇ ಪರಿಪಾಠ..
ರಂಗೋಲಿಯ ಸೌಂದರ್ಯ ಸವಿಯುವುದು...
ಒಡತಿಯ ಹುಡುಕುವುದು..
ಯಾರು ಕಾಣಲಿಲ್ಲ...
ಕಾಣಿಸುವುದೂ ಇಲ್ಲವೇನೋ????
ನಿನ್ನೆ.............
ಕಿಟಕಿ ತೆರೆದಿತ್ತು!!!!
ಆದರೆ ,
ರಂಗೋಲಿಯ ಬಣ್ಣ ಕಾಣಲಿಲ್ಲ,
ಗಂಧ ಸೂಸಲಿಲ್ಲ
ಬಹುಶಃ !!???
ಒಡತಿ ಇಲ್ಲವೇನೋ?????